ಹೊಸನಗರ ನಾಗರಾಜೇಗೌಡ ಗಿರೀಶ್ , ( ಹುಟ್ಟು -೨೬ ಜನವರಿ ೧೯೮೮) ಕ್ರೀಡಾಪಟುವಾಗಿದ್ದಾರೆ.
ಅವರ ಎಡಗಾಲು ಹುಟ್ಟಿನಿಂದಲೇ ಊನವಾಗಿದೆ. ಇವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊಸನಗರದವರು. ಗಿರೀಶ್ ೨೦೦೬ರಿಂದ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುತ್ತಾ ಬಂದಿದ್ದಾರೆ. . ಅಂತರರಾಷ್ಟ್ರೀಯ ಕೂಟಗಳಲ್ಲೂ ಪದಕದ ಸಾಧನೆ ಮಾಡಿದ್ದಾರೆ. ಅವರು ಲಂಡನ್ನಲ್ಲಿ ನಡೆದ ೨೦೧೨ರ ಪ್ಯಾರಾಲಿಂಪಿಕ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ F-42 ವರ್ಗದಲ್ಲಿ ಪುರುಷರ ಎತ್ತರದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ . ಕತ್ತರಿ ತಂತ್ರವನ್ನು ಬಳಸಿಕೊಂಡು ೧.೭೪ ಮೀಟರ್ ಜಿಗಿದು ಫೈನಲ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಎಂಟನೇ ಭಾರತೀಯರಾದರು.
ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟವೊಂದರಲ್ಲಿ ಅವರು ಸಾಮಾನ್ಯ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಒಂದು ಬಹುಮಾನ ಪಡೆದು ಗಿರೀಶರು ಯಶಸ್ಸಿನ ಮೊದಲ ರುಚಿಯನ್ನು ನೋಡಿದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಒಂದು ಕಂಚಿನ ಪದಕ ಗೆದ್ದಿದ್ದಾರೆ. ನಂತರ ರಾಷ್ಟ್ರೀಯ ಎತ್ತರ ಜಿಗಿತದ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು ೨೦೦೬ ರಲ್ಲಿ ಐರ್ಲೆಂಡ್ ನಲ್ಲಿ ಅಂಗವಿಕಲರ ಕಿರಿಯ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಸಾಧನೆಯನ್ನು ಮಾಡಿದರು. ನಂತರ ಈ ಕುವೈಟ್ ಮತ್ತು ಮಲೇಷ್ಯಾ ರಲ್ಲಿ ಅಥ್ಲೆಟಿಕ್ ಕೂಟಗಳಲ್ಲಿ ಚಿನ್ನದ ಪದಕಗಳನ್ನು ಪಡೆದರು. ೨೦೧೩ ರಲ್ಲಿ ಗಿರೀಶ್ಗೆ ಪದ್ಮಶ್ರೀ ಗೌರವ ಒಲಿದಿದೆ.
೨೦೧೩ ರಲ್ಲಿ ಗಿರೀಶ್ಗೆ ಪದ್ಮಶ್ರೀ ಗೌರವ ಒಲಿದಿದೆ.
This article uses material from the Wikipedia ಕನ್ನಡ article ಎಚ್.ಎನ್.ಗಿರೀಶ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.