ಮೋಹನ್ ಆಳ್ವ ಅವರು ಆರಂಭಿಸಿರುವ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಮ್ಮೇಳನ ಇದಾಗಿದೆ. ಇಂದಿನ ಜಾಗತಿಕ ವ್ಯಾಪಾರ ತತ್ತ್ವ ಮಂಡಿಸುವ ಆರ್ಥಿಕ ಸಂಸ್ಕೃತಿಗೆ ದೇಶಿಯ ಸಂಸ್ಕೃತಿಯ ಮುಖಾಮುಖಿ, ಏಕಭಾಷೆ, ಏಕ ಸಂಸ್ಕೃತಿಯ ದಾಳಿಯ ವಿರುದ್ಧ ಪ್ರಾದೇಶಿಕ ಭಾಷೆ ಮತ್ತು ಬಹುರೂಪಿ ಸಂಸ್ಕೃತಿಯ ಪ್ರತಿಪಾದನೆ, ಭವಿಷ್ಯದಲ್ಲಿ ಕನ್ನಡವನ್ನು ಕಟ್ಟುವ ಯುವ ಪ್ರಪಂಚಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸಮ್ಮೇಳನಗಳಿಗೆ ಮಾದರಿಯಾಗಬೇಕೆಂಬುದೇ ಈ ಅಕ್ಷರ ಜಾತ್ರೆಯ ಹಂಬಲ. ಈ ಎಲ್ಲಾ ಉದ್ದೇಶಗಳನ್ನು ಇಟ್ಟುಕೊಂಡು ವರ್ಷಂಪ್ರತಿ ಸಾಕಷ್ಟು ಪೂರ್ವಸಿದ್ದತೆಗಳೊಂದಿಗೆ ಆಳ್ವಾಸ್ ನುಡಿಸಿರಿ ನಡೆಯುತ್ತದೆ.ಅದರ ಹೆಜ್ಜೆ ಗುರುತುಗಳನ್ನು ಇಲ್ಲಿ ಗಮನಿಸಬಹುದು.
ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013
ಅಧ್ಯಕ್ಷರು:ಡಾ. ಬಿ.ಎ. ವಿವೇಕ ರೈ, ಜಾನಪದ ವಿದ್ವಾಂಸರು
ಹನ್ನೊಂದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2014
ಅಧ್ಯಕ್ಷರು:ನಾಡೋಜ ಡಾ. ಸಿದ್ಧಲಿಂಗಯ್ಯ, ಖ್ಯಾತ ಕವಿಗಳು
ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015
ಅಧ್ಯಕ್ಷರು:ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ
ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016
ಅಧ್ಯಕ್ಷರು:ಡಾ. ಬಿ. ಎನ್. ಸುಮಿತ್ರ ಬಾಯಿ
ಸಮ್ಮೇಳನದ ಉದ್ಘಾಟಕರು
ಮೊದಲನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2004
ಉದ್ಘಾಟಕರು:ಪ್ರೊ. ಚಂದ್ರಶೇಖರ ಪಾಟೀಲ,ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಎರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2005
ಉದ್ಘಾಟಕರು:ಡಾ. ಎಂ.ಎಂ. ಕಲ್ಬುರ್ಗಿ, ನಿವೃತ್ತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮೂರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2006
ಉದ್ಘಾಟಕರು:ಡಾ. ಸಿದ್ದಲಿಂಗಯ್ಯ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ನಾಲ್ಕನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2007
ಉದ್ಘಾಟಕರು:ನಿ. ವ್ಯಾಸರಾಯ ಬಲ್ಲಾಳ ಹಿರಿಯ ಕಾದಂಬರಿಕಾರರು
ಐದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2008
ಉದ್ಘಾಟಕರು:ನಾಡೋಜ ಕೆ.ಎಸ್. ನಿಸಾರ್ ಅಹಮದ್ ಹಿರಿಯ ಸಾಹಿತಿಗಳು
ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2009
ಉದ್ಘಾಟಕರು:ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಖ್ಯಾತ ಕವಿಗಳು
ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2010
ಉದ್ಘಾಟಕರು:ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಖ್ಯಾತ ಕವಿಗಳು
ಎಂಟನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2011
ಉದ್ಘಾಟಕರು:ಡಾ. ಬರಗೂರು ರಾಮಚಂದ್ರಪ್ಪ, ಪ್ರಸಿದ್ಧ ಸಾಹಿತಿಗಳು
ಒಂಬತ್ತನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2012
ಉದ್ಘಾಟಕರು:ಡಾ. ಯು.ಆರ್. ಅನಂತಮೂರ್ತಿ, ಪ್ರಸಿದ್ಧ ಸಾಹಿತಿಗಳು, ಚಿಂತಕರು
ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013
ಉದ್ಘಾಟಕರು:ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ
ಹನ್ನೊಂದನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013
ಉದ್ಘಾಟಕರು:ಡಾ. ನಾ. ಡಿ.ಸೋಜ, ಹಿರಿಯ ಸಾಹಿತಿಗಳು, ಚಿಂತಕರು
ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015
ಉದ್ಘಾಟಕರು:ಡಾ. ವೀಣಾ ಶಾಂತೇಶ್ವರ,ಖ್ಯಾತ ಸಾಹಿತಿಗಳು
ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016
ಉದ್ಘಟಕರು: ಡಾ. ಜಯಂತ ಗೌರೀಶ ಕಾಯ್ಕಿಣಿ, ಖ್ಯಾತ ಸಾಹಿತಿಗಳು
ಸಮ್ಮೇಳನದ ಪರಿಕಲ್ಪನೆಗಳು
ಪ್ರತಿವಷವೂ ಆಳ್ವಾಸ್ ನುಡಿಸಿರಿಯು ಒಂದು ಮುಖ್ಯಪರಿಕಲ್ಪನೆಯಡಿಯಲ್ಲಿ ನಡೆಯುತ್ತದೆ. ಕನ್ನಡ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯಿಕ-ಸಾಂಸ್ಕೃತಿಕ ಸವಾಲುಗಳು, ಬೌದ್ಧಿಕ ಸ್ವಾತಂತ್ರ್ಯ, ಪ್ರಚಲಿತ ಪ್ರಶ್ನೆಗಳು, ಸಾಹಿತಿಯ ಜವಾಬ್ದಾರಿ,ಶಕ್ತಿ ಮತ್ತು ವ್ಯಾಪ್ತಿ, ಸಮನ್ವಯದೆಡೆಗೆ, ಜೀವನ ಮೌಲ್ಯಗಳು, ಸಂಘರ್ಷ ಮತ್ತು ಸಾಮರಸ್ಯ, ಜನಪರ ಚಳವಳಿಗಳು,ಹೊಸತನದ ಹುಡುಕಾಟ ವಿಷಯಗಳ ಮೇಲೆ ಸಮ್ಮೇಳನಗಳನ್ನು ನಡೆಸಲಾಗುತ್ತದೆ. ಸಮ್ಮೇಳನದಲ್ಲಿ ನಡೆಯುವ ವಿಚಾರ ಗೋಷ್ಠಿಗಳು, ಚರ್ಚೆಗಳು, ಸಂವಾದಗಳು ಮುಖ್ಯ ಪರಿಕಲ್ಪನೆಗೆ ಅನುಸಾರವಾಗಿಯೇ ನಡೆಯುತ್ತವೆ.
ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013
ಪರಿಕಲ್ಪನೆ:ಕನ್ನಡ ಮನಸ್ಸು : ಅಂದು-ಇಂದು-ಮುಂದು
ಹನ್ನೊಂದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2014
ಪರಿಕಲ್ಪನೆ:ಕರ್ನಾಟಕ : ವರ್ತಮಾನದ ತಲ್ಲಣಗಳು
ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015
ಪರಿಕಲ್ಪನೆ:ಕರ್ನಾಟಕ : ಹೊಸತನದ ಹುಡುಕಾಟ
ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016
ಪರಿಕಲ್ಪನೆ: ಕರ್ನಾಟಕ
ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತರು
ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಶಿಲ್ಪಕಲೆ, ಕೃಷಿ, ರಂಗಭೂಮಿ, ಜಾನಪದ, ಸಿನಿಮಾ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಯನ್ನು ನೀಡಿದ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ರೂ. ೨೫,೦೦೦ ನಗದು, ಸ್ಮರಣಿಕೆ, ಪ್ರಶಸ್ತಿಪತ್ರಗಳನ್ನು ಒಳಗೊಂಡಿರುತ್ತದೆ. ಸಮಾರೋಪ ಸಮಾರಂಭದಂದು ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಆಳ್ವಾಸ್ ನುಡಿಸಿರಿ ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ, ಅದು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಸವವೂ ಹೌದು. ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ರಂಗಕ್ಕೆ ಸೇರಿದ ಕಲಾವಿದರಿಗೆ ಅಪೂರ್ವ ಅವಕಾಶವನ್ನು ನೀಡಿದೆ. ಕರ್ನಾಟಕದ ಸಾಂಪ್ರದಾಯಿಕ, ಜಾನಪದ, ರಂಗಭೂಮಿ ಕಲೆಗಳಿಗೆ ನುಡಿಸಿರಿ ಅತಿದೊಡ್ಡ ವೇದಿಕೆಯನ್ನು ಕಲ್ಪಿಸಿದೆ. ಬೆಳಗ್ಗೆ ವಿಚಾರಗೋಷ್ಠಿಗಳಿಗೆ ಮೀಸಲಾದ ವೇದಿಕೆಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆದುಕೊಳ್ಳುತ್ತವೆ. ಭರತನಾಟ್ಯ, ಕೂಚುಪುಡಿ, ಮೋಹಿನಿಯಟ್ಟಂ, ಒಡಿಸ್ಸಿ, ಕಥಕ್, ಕಥಕ್ಕಳಿಯಂತಹ ಸಾಂಪ್ರದಾಯಿಕ ಕಲಾಪ್ರಕಾರಗಳ ಜೊತೆಗೆ ಯಕ್ಷಗಾನ, ಕಂಸಾಳೆ, ಡೊಳ್ಳುಕುಣಿತ,ಬಂಜಾರ, ದಾಂಡಿಯಾ, ಗರ್ಬಾ, ಪುರುಲಿಯೋ,ಲಾವಣಿಯಂತಹ ಜಾನಪದ ಕಲೆಗಳು ಇಲ್ಲಿ ಪ್ರದಶಿಸಲ್ಪಡುತ್ತವೆ. ಇದರೊಡನೆ ಸಂಸ್ಥೆಯಲ್ಲಿ ಓದುತ್ತಿರುವ ಮಣಿಪುರ ಹಾಗೂ ಶ್ರೀಲಂಕಾದ ವಿದ್ಯಾರ್ಥಿಗಳ ಸಹಾಯದಿಂದ ಅಲ್ಲಿನ ಸಾಂಸ್ಕೃತಿಕ ಕಲೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ಕೆಲಸವನ್ನು ನುಡಿಸಿರಿ ಮಾಡುತ್ತಿದೆ. ನುಡಿಸಿರಿಯಲ್ಲಿ ಆಹ್ವಾನಿತ ಕಲಾವಿದರ ಜೊತೆಗೆ ಸ್ವತಃ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಈ ರಾಷ್ಟ್ರಮಟ್ಟದ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಲೋಕಕ್ಕೆ ಆಳ್ವಾಸ್ ನುಡಿಸಿರಿಯ ಕೊಡುಗೆ ದೊಡ್ಡದೆಂದೇ ಹೇಳಬಹುದು. ವೈವಿಧ್ಯಮಯ ಕಲೆಗಳನ್ನು ಜನತೆಗೆ ಉಣಬಡಿಸುವ ಜೊತೆಗೆ ಎಲೆಮರೆಯ ಕಾಯಿಯಂತಿರುವ ಎಷ್ಟೋ ಪ್ರತಿಭಾನ್ವಿತ ಕಲಾವಿದರನ್ನು ಆಳ್ವಾಸ್ ನುಡಿಸಿರಿ ಜನತೆಗೆ ಪರಿಚಯಿಸಿದೆ.
This article uses material from the Wikipedia ಕನ್ನಡ article ಆಳ್ವಾಸ್ ನುಡಿಸಿರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.