(ಬ್ಲಾಗ್ ಮಾದರಿಯ ಪ್ರಬಂಧ ?)
ಅಸ್ಸಾಂ | |
ರಾಜಧಾನಿ - ಸ್ಥಾನ | ದಿಸ್ಪುರ್ - |
ಅತಿ ದೊಡ್ಡ ನಗರ | ಗುವಾಹತಿ |
ಜನಸಂಖ್ಯೆ (2004) - ಸಾಂದ್ರತೆ | 26,655,528 (14th) - 340/km² |
ವಿಸ್ತೀರ್ಣ - ಜಿಲ್ಲೆಗಳು | 78,438 km² (16th) - 27 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) | ಆಗೋಸ್ತು ೧೫,೧೯೪೭ - ಸಯ್ಯದ್ ಸಿಬ್ತೆ ರಜಿ - ತರುಣ್ ಗೊಗೋಯ್ - Unicameral (126) |
ಅಧಿಕೃತ ಭಾಷೆ(ಗಳು) | ಅಸ್ಸಾಮೀಸ್,ಬೋಡೋ,ಬಂಗಾಳಿ |
Abbreviation (ISO) | IN-AS |
ಅಂತರ್ಜಾಲ ತಾಣ: www.assam.gov.in | |
ಅಸ್ಸಾಂ ರಾಜ್ಯದ ಮುದ್ರೆ |
[೧][೨][೩][೪]
ಅಸ್ಸಾಮ್ನುಲ್ಲಿ ಒಟ್ಟು ೨೭ ಜಿಲ್ಲೆಗಳು ಇವೆ.ಇವುಗಳನ್ನು ಸ್ಥೂಲವಾಗಿ ಕೇಂದ್ರ ಅಸ್ಸಾಂ ಜಿಲ್ಲೆಗಳು,ಪಶ್ಚಿಮ ಅಸ್ಸಾಂ ಜಿಲ್ಲೆಗಳು, ಉತ್ತರ ಅಸ್ಸಾಂ ಜಿಲ್ಲೆಗಳು ಮತ್ತು ದಕ್ಷಿಣ ಅಸ್ಸಾಂ ಜಿಲ್ಲೆಗಳು ಎಂದು ವಿಭಾಗಿಸಬಹುದು.
ಪಶ್ಚಿಮ ಅಸ್ಸಾಮ್ನಜಲ್ಲಿ ಬರುವ ಈ ಜಿಲ್ಲೆರಾಜ್ಯದ ರಾಜಧಾನಿ ಡಿಸ್ಪುರರದಿಂದ ೫೦೦ ಕಿಮಿ ದೂರವಿದೆ.ಗೇರುಕಾ ಮುಖ್ ಎಂಬ ಸ್ಥಳ ಜಿಲ್ಲಾ ಕೇಂದ್ರದಿಂದ ೪೪ ಕಿಮಿ ದೂರವಿದೆ.ಇದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳ.ಇಲ್ಲಿ ಜಲ ವಿದ್ಯುದಾಗಾರವೊಂದಿದೆ.
ಧೇಮ್ ಜಿಯಿಂದ ೪೨ ಕಿಮಿ ದೂರವಿದೆ.ಇಲ್ಲಿ ಮಾಲಿನಿ ದೇವಿಯ ಪುರಾತನ ಮಂದಿರವಿದೆ.ಪುರಾತನ ಇತಿಹಾಸದ ಪಳೆಯುಳಿಕೆಗಳು ಉತ್ಖನನದಿಂದ ದೊರೆತಿವೆ.
ಜಿಲ್ಲಾ ಕೇಂದ್ರದಿಂದ ೨೫ ಕಿಮಿ ದೂರವಿದೆ. ಅಹೋಂ ಅರಸ ಗೌರಿನಾಥ ಸಿಂಘಾ ನಿರ್ಮಿಸಿದನೆಂದು ಹೇಳಲಾದ ಕಟ್ಟಡ ಇದೆ. ಇದರೊಂದಿಗೆ ರಾಜ್ಘತರ್,ಘರಾಕಿಯಾ ಥಾನ್ ಮತ್ತು ರಾಜ್ ಘರ್ ಆಲಿ ನೋಡಬಹುದಾದ ಸ್ಥಳಗಳು.
ಗೌಹಾತಿಯಿಂದ ೫೦೦ ಕಿಮಿ ದೂರವಿರುವ ಈ ಪಟ್ಟಣ ಕೈಗಾರಿಕಾ ನಗರ ಎಂದು ಹೆಸರಾಗಿದೆ.ಇಲ್ಲಿ ಟೀ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಕಿತ್ತಳೆ ಬೆಳೆಗೆ ಹೆಸರುವಾಸಿ.ಪ್ರವಾಸಿಗರಿಗಾಗಿ ದಹಿಂಗ್ ಪಟ್ಕಾಯ ಟೀ ಹಬ್ಬವನ್ನು ಪ್ರತೀ ವರ್ಷ ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಅಚರಣೆಯ ಸ್ಥಳ ತೀನ್ಸುರಖಿಯಾದಿಂದ ೭೦ ಕಿಮಿ ದೂರವಿದೆ.ರಸ್ತೆ ಮತ್ತು ರೈಲು ಪ್ರಯಾಣದಿಂದ ಇಲ್ಲಿಗೆ ತಲುಪಬಹುದು.ಇಲ್ಲಿ ಶಿವಧಾಮ ಮತ್ತು ಮಾರುಕ್ ನಂದನ್ ಕಾನನ್ ಪಾರ್ಕ್ ನೋಡಬಹುದು.ತಂಗಲು ಉತ್ತಮ ಹೋಟೆಲುಗಳಿವೆ.ತೀನ್ಸುತಖಿಯಾದ ಬಳಿ ಟಿಬೆಟ್ ನಿರಾಶ್ರಿತರಿಗಾಗಿ ಒಂದು ಕ್ಯಾಂಪ್ ಇದ್ದು ಇಲ್ಲಿ ಬಹಳ ಸುಂದರವಾದ ಕಾರ್ಪೆಟ್ಗವಳನ್ನು ತಯಾರಿಸಲಾಗುತ್ತದೆ.
ತೀನ್ಸುಯಖಿಯಾದಿಂದ ೧೪ ಕಿಮಿ ದೂರವಿದೆ.ತೀರ ಜೌಗು ಪ್ರದೇಶವಾಗಿದ್ದು ಕಾಡು ಕುದುರೆಗಳು,ಆನೆಗಳು,ವುಡ್ ಡಕ್,ಕಾಡೆಮ್ಮೆ,ಗಿಬ್ಬನ್ ಕೋತಿಗಳು ವಾಸಿಸುತ್ತವೆ.ಬೇರ್ಜಾನ್-ಬೋರ್ಜಾನೀ ಅಭಯಾರಣ್ಯ ತೀನ್ಸುಸಖಿಯಾದಿಂದ ೬ ಕಿಮಿ ದೂರವಿದೆ.ಇಲ್ಲಿ ಗಿಬ್ಬನ್ ಕೋತಿಗಳು ವಾಸಿಸುತ್ತವೆ.
ತೀನ್ಸುನಖಿಯದಿಂದ ೧೭ ಕಿಮಿ ದೂರವಿದೆ.ಇಲ್ಲಿ ಭಾರಿ ಗಾತ್ರದ ಹಳೆಯ ಅರಳಿ ಮರವೊಂದಿದೆ.ಭಕ್ತರು ಈ ದೇವಾಲಯಕ್ಕೆ ಬಂದು ತಮ್ಮ ಹರಕೆಯನ್ನು ಹೇಳಿಕೊಂಡು ಶಿವನಿಗೆ ಘಂಟೆಯೊಂದನ್ನು ಅರ್ಪಿಸಿ ಅದನ್ನು ಇಲ್ಲಿನ ಮರಕ್ಕೆ ಕಟ್ಟಿದರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ.
೧೮೮೯ ರಲ್ಲಿ ಮೊದಲನೇ ಎಣ್ಣೆ ಭಾವಿಯನ್ನು ಇಲ್ಲಿ ತೋಡಲಾಯ್ತು.ಬ್ರಿಟೀಷರು ಇಲ್ಲಿಗೆ ಬಂದು ತೈಲ ನಿಕ್ಷೇಪವನ್ನು ಕಂಡು ಹಿಡಿದು ಸ್ಥಳೀಯರಿಗೆ 'ಡಿಗ್ ಬಾಯ್, ಡಿಗ್’ ಎಂದು ಅಗೆಯಲು ಹೇಳಿದ ಕಾರಣ ಆ ಪದ ಅಪಭ್ರಂಶವಾಗಿ ದಿಗ್ಬೋತಯ್ ಆಯಿತೆಂದು ಹೇಳಲಾಗುತ್ತದೆ. ಎಣ್ಣೆ ಭಾವಿಗಾಗಿ ಬ್ರಿಟೀಷರು ಮತ್ತು ಬರ್ಮೀಯರ ನಡುವೆ ಯುದ್ದ ನಡೆದು ಅದು ಆಂಗ್ಲೊ-ಬರ್ಮಾ ಯುದ್ಧ ಎಂದು ಹೆಸರಾಗಿದೆ.ಈ ಯುದ್ಧ ಸ್ಮಾರಕ ವೊಂದು ಇಲ್ಲಿದೆ.
ತೀನ್ಸು್ಖಿಯಾದಿಂದ ೭೫ ಕಿಮಿ ದೂರವಿದೆ.ಈ ಸ್ಥಳ ಮೊದಲು ಆದಿವಾಸಿಗಳ ಸರಕಿನ ಮಾರ್ಕೆಟ್ ಆಗಿತ್ತು.
ತೀನ್ಸುಮಖಿಯಾದಿಂದ ೧೫೦ ಕಿಮಿ ದೂರವಿದೆ.ಈ ಕೊಳದಲ್ಲಿ ಪ್ರತೀ ವರ್ಷ ಸಂಕ್ರಾಂತಿಯಂದು ನೂರಾರು ಭಕ್ತರು ಬಂದು ಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡ ತೃಪ್ತಿ ಪಡೆಯುತ್ತಾರೆ.
ಟೀ ತೋಟಗಳ ನಡುವೆ ಇರುವ ಈ ಸ್ಥಳ ತನ್ನ ದೈವೀಕ ಸೌಂದರ್ಯಕ್ಕೆ ಹೆಸರಾಗಿದೆ.ಇಲ್ಲಿ ಕುದುರೆಗಳ ಮೇಲೆ ಕುಳಿತು ಸುತ್ತಬಹುದು. ಮಾರ್ಗರೀಟದಲ್ಲಿ ಪ್ಲೈ-ವುಡ್ ತಯಾರಿಕಾ ಘಟಕವಿದೆ.
ತೀನ್ಸುೀಖಿಯಾದಿಂದ ೧೩೦ ಕಿಮಿ ದೂರವಿದ್ದು ಮೈನ್ಮಾರ್ ದೇಶದ ಗಡಿ ಬಳಿಇದೆ.ಇಲ್ಲಿಗೆ ತಲುಪಲು ತೀರಾ ಕಷ್ಟಸಾಧ್ಯವಾದ ಹಾದಿ ಇದೆ.ಈ ಪ್ರದೇಶದಲ್ಲಿ ರಹಸ್ಯವಾದ ’ಲೇಕ್ ಆಫ಼್ ನೋ ರಿಟರ್ನ್’ ಎಂಬ ಸ್ಥಳವಿದೆ.ಇದು ಮೈನ್ಮಾರ್ ನಲ್ಲಿದ್ದು ಇಲ್ಲಿಗೆ ಭೇಟಿ ನೀಡಲು ಪ್ರತಿ ತಿಂಗಳ ೧೫ ಮತ್ತು ೩೦ ರಂದು ಅನುಮತಿಸಲಾಗುತ್ತದೆ. ಈ ಸ್ಥಳದಲ್ಲಿ ಹಿಂದೆ ವಿಮಾನವೊಂದು ರಹಸ್ಯವಾಗಿ ಕಣ್ಮರೆ ಆಯಿತೆಂದು ಹೇಳಲಾಗುತ್ತದೆ.
ಜೋರ್ಹಟ್ನಿಂ್ದ ೫೫ ಕಿಮಿ ದೂರವಿದೆ.ಸಿಮಲ್ಗು್ರಿ ರೈಲು ನಿಲ್ದಾಣದಿಂದ ೧೬ ಕಿಮಿ ಇದೆ.ಈ ಪ್ರದೇಶ ಬಹಳ ಹಿಂದೆ ಆದಿವಾಸಿಗಳ ಆಡಳಿತದಲ್ಲಿತ್ತು.ಈ ನಗರದಲ್ಲಿ ೧೦೪ ಅಡಿ ಎತ್ತರದ ಶಿವನ ವಿಗ್ರಹ ಇದೆ. ಇಲ್ಲಿಗೆ ಭೇಟಿ ನೀಡಲು ಸೆಪ್ಟೆಂಬರ್ನಿಂದ ಏಪ್ರಿಲ್ ಉತ್ತಮ ಕಾಲ.ಇಲ್ಲಿ ೧೭೦೩ ರಲ್ಲಿ ನಿರ್ಮಿಸಲಾದ ಏಕಶಿಲಾ ಸೇತುವೆ ಇದೆ.ಇದು ಇಂದಿಗೂ ಸುಸ್ಥಿಯಲ್ಲಿದ್ದು ಈಗಲೂ ಇದರ ಮೇಲೆ ರಾಷ್ಟ್ರೀಯ ಹೆದ್ದಾರಿ-೩೭ ಸಾಗುತ್ತದೆ.
೧೭೪೬ ರಲ್ಲಿ ಅಹೋಂ ಅರಸರಿಂದ ನಿರ್ಮಿಸಲ್ಪಟ್ಟ ಎರಡು ಅಂತಸ್ತಿನ ಕಟ್ಟಡ ಮತ್ತು ಆಟದ ಮೈದಾನ ಇದೆ.
೧೭೦೦ ರಲ್ಲಿ ಈ ಅರಮನೆಗಳು ಅಹೋಂ ಅರಸರಿಂದ ನಿರ್ಮಿಸಲ್ಪಟ್ಟವು.ಈ ಅರಮನೆಗಳಿಂದ ಭೂಗತ ದಾರಿಗಳಿವೆ ಎಂದು ಹೇಳಲಾಗುತ್ತದೆ.ಸರಕು ದಾಸ್ತಾನಿಗೆ ನೆಲಮಾಳಿಗೆಗಳಿವೆ.
ಇದು ಅಹೋಂ ಅರಸರ ಸಮಾಧಿ ಸ್ಥಳ. ಇಲ್ಲಿ ಅವರ ಪವಿತ್ರಾತ್ಮಗಳಿವೆ ಎಂದು ನಂಬಲಾಗುತ್ತದೆ.ಇಲ್ಲಿ ೧೭೩೪ ರಲ್ಲಿ ೧೨೯ ಎಕರೆಗಳಷ್ಟು ವಿಸ್ತಾರವಾದ ಕೆರೆಯೊಂದನ್ನು ನಿರ್ಮಿಸಲಾಯ್ತು.ಈ ಕೆರೆಯ ದಂಡೆಯ ಮೇಲೆ ಶಿವನ ದೇವಾಲಯವೊಂದಿದೆ.
೩೧೮ ಎಕರೆಗಳಷ್ಟು ವಿಸ್ತಾರವಾಗಿರುವ ಇದು ಮಾನವ ನಿರ್ಮಿತವಾದದ್ದು.ಗೌರೀ ಸಾಗರ ಮತ್ತು ರುದ್ರ ಸಾಗರ ಕೆರೆಗಳು ನೋಡ ತಕ್ಕವು.
ಶಿವಸಾಗರದಿಂದ ೨೨ ಕಿಮಿ ದೂರವಿದ್ದು ಮುಸಲ್ಮಾನ ಸಂತ ಆಜನ್ ಪೀರ್ನ ಸಮಾಧಿ ಸ್ಥಳವಾಗಿದೆ.ಇಲ್ಲಿಗೆ ಮುಸ್ಲೀಮರು ಬಂದು ಈ ಸಂತನನ್ನು ಪ್ರಾರ್ಥಿಸುತ್ತಾರೆ.
ಅರುಣಚಲ ಪ್ರದೇಶದ ಪಕ್ಕ ಇರುವ ಈ ಜಿಲ್ಲೆಯನ್ನು ಟೀ ತೋಟಗಳು ಸುತ್ತುವರೆದಿವೆ. ಹಿಮಾಲಯದ ಹಿನ್ನೆಲೆ ಹೊಂದಿದ ಈ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ.ರಾಷ್ಟ್ರಿಯ ಹೆದ್ದಾರಿ-೩೭ ಇಲ್ಲಿಗೆ ತಲುಪುತ್ತದೆ.ರೈಲು ಅನುಕೂಲ ಸಾಕಷ್ಟಿದೆ.ಕೋಲ್ಕತ್ತದಿಂದ ವಿಮಾನ ಸೌಲಭ್ಯ ಇದೆ.ದಿಬ್ರೂಘರ್ನಲ್ಲಿ ಒಂದು ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇದೆ.
ಕೋಲಿ ಆಯಿ ಎಂಬಾಕೆ ದಿಬಾರು ಸತ್ರದ ಮುಖ್ಯ ಪೂಜಾರಿಯ ಮಗಳು. ಈಕೆಗೆ ಭವಿಷ್ಯ ಹೇಳುವ ವಿಶೇಷ ಶಕ್ತಿ ಇತ್ತೆಂದು ಹೇಳಲಾಗುತ್ತದೆ.ಈಕೆಯ ಮರಣಾನಂತರ ದೇವಾಲಯ ನಿರ್ಮಿಸಿ ಆಕೆಯ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ.ಇಲ್ಲಿಗೆ ಪ್ರತೀ ವರ್ಷ ಸಹಸ್ರಾರು ಅಸ್ಸಾಮಿಯರು ಭೇಟಿ ನೀಡುತ್ತಾರೆ.ದಿನೋಯ್ ಸತ್ರ,ದೆಹಿಂಘ್ ನಾಮ್ಟಿ್ ಸತ್ರ,ದಿನ್ ಜೋಯ್ ಸತ್ರ,ಮೊಡರ್ ಕಾಲ್ ಸತ್ರ,ಘರ್ ಪಾರ ಸತ್ರ ಮುಂತಾದುವುಗಳಿವೆ.
ಜೋರ್ಹಟ್ ಅಹೋಂ ಅರಸರ ಕೊನೆಯ ರಾಜಧಾನಿಯಾಗಿತ್ತು.ಇಲ್ಲಿ ಸುಮಾರು ೧೩೫ ಕ್ಕೂ ಹೆಚ್ಚು ಟೀ ತೋಟಗಳಿವೆ.ಈ ಜಿಲ್ಲೆಯಲ್ಲಿ ಸುಮಾರು ೧.೫ ಲಕ್ಷ ಜನಸಂಖ್ಯೆ ಇದೆ.೧೮೫೬ ರಲ್ಲಿ ಸ್ಥಾಪಿತವಾದ ಈಸ್ಟ್ರನ್ ಥಿಯೋಲಾಜಿಕಲ್ ಕಾಲೇಜ್ ಮತ್ತು ೧೯೪೮ ರಲ್ಲಿ ಸ್ಥಾಪಿತವಾದ ಅಸ್ಸಾಮ್ ಕೃಷಿ ಕಾಲೇಜು ಇದೆ. ಅರಸರ ಕಾಲದಲ್ಲಿ ಆನೆಗಳನ್ನು ಹಿಡಿಯಲು ನಿರ್ಮಿಸಿದ್ದ ಖೆಡ್ಡಾ ಈಗಲೂ ಗಾಜ್ಪುರರದಲ್ಲಿದೆ. ಈ ಜಿಲ್ಲೆಯಲ್ಲಿರುವ ಅಸ್ಸಂನ ಪ್ರಸಿದ್ದ ಸಿನ್ನಮೋರ್ ಟೀ ತೋಟ ೧೮೫೦ ರಿಂದ ಪ್ರಸಿದ್ದಿಯಾಗಿದೆ.
ಮಜುಲಿ ಬ್ರಹ್ಮಪುತ್ರ ನದಿಯಿಂದ ಸುತ್ತುವರೆದು ದ್ವೀಪದಂತಾಗಿದೆ.ಇದು ವೈಷ್ಣವರಿಗೆ ಪವಿತ್ರವಾದ ಸ್ಥಳ.ಇಲ್ಲಿ ಅವರಿಗೆ ಪವಿತ್ರವಾದ ನಾಲ್ಕು ಸತ್ರಗಳಿವೆ.ಆಯುನಿಯಾತಿ, ದಕ್ಷಿಣಾಪಥ, ಘರಾಮುರ್,ಮತ್ತು ಕಮಲಬಾರಿ ಇವು ಶ್ರೀಮಾತ ಶಂಕರದೇವನ ಕಾಲದಲ್ಲಿ ಸ್ಥಾಪಿತವಾಗಿ ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಿವೆ.ಇಲ್ಲಿ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ಅಭಿನಯಿಸಲಾಗುತ್ತದೆ.
ಬುರಿ ಗೋಸಾಯ್ ದೇವಾಲಯಗಳು ನೋಡತಕ್ಕ ಸ್ಥಳಗಳು. ಬಂಗಾಲ ಪುಕುರಿ ಕೆರೆ ರೂಪ್ ಸಿಂಗ್ ಬಂಗಾಲನಿಂದ ನಿರ್ಮಿತವಾಯ್ತು.ರೂಪ್ ಸಿಂಗ್ ಈ ಕೆರೆ ನಿರ್ಮಿಸಲು ತಾನು ಮಾಡಿದ ಕೊಲೆಗೆ ಪ್ರತಿಫ಼ಲವಾಗಿ ಪಡೆದ ಹಣದಿಂದ ನಿರ್ಮಿಸಿದ ಎಂಬ ಕಾರಣಕ್ಕಾಗಿ ಇಂದಿಗೂ ಜನ ಇದರ ನೀರನ್ನು ಬಳಸುವುದಿಲ್ಲ.
ಈ ಜಿಲ್ಲೆಯಲ್ಲೆ ಪ್ರಸಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇದೆ. ೧೯೦೮ ರಲ್ಲಿ ಸ್ಥಾಪಿತವಾದ ಈ ಪಾರ್ಕ್ ೧೯೮೫ ರಲ್ಲಿ ವಿಶ್ವ ಸಂಸ್ಥೆಯಿಂದ ಸಂರಕ್ಷಿತ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಈ ಪಾರ್ಕನ್ನು ಮೇ ತಿಂಗಳಿನಿಂದ ಅಕ್ಟೋಬರ್ವರೆಗೆ ಮುಚ್ಚಲಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಲು ನವೆಂಬರ್ನಿಂದ ಮಾರ್ಚ್ ಉತ್ತಮ ಕಾಲ. ಈ ಪಾರ್ಕ್ನಲ್ಲಿ ಜೀಪ್ ಸಫ಼ಾರಿ,ಆನೆ ಸಫ಼ಾರಿ ಇದೆ.ತಂಗಲು ಅಸ್ಸಾಮ್ ಸರಕಾರದ ಟೂರಿಸ್ಟ್ ಲಾಡ್ಜ್ ಇದೆ. ಗೋಲಾಘಾಟ್ನಿಂದ ೧೮ ಕಿಮಿ ದೂರದಲ್ಲಿ ಬಿಸಿನೀರ ಬುಗ್ಗೆ ಇದೆ. ಇದನ್ನು ಅಸ್ಸಾಮಿಯರು ಗರಂ ಪಾನಿ ಎಂದು ಕರೆಯುತ್ತಾರೆ.ಇದು ದಿಮಾಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿ-೩೯ ರ ಬಳಿಯೆ ಇದೆ.ಇದಕ್ಕೆ ತುಸು ದೂರದಲ್ಲಿ ಒಂದು ಶಿವ ದೇವಾಲಯವಿದೆ. ಬಾರ್ಡೊವಾ,ಬಾರ್ಪೇಟ,ಮಾದುಪುರಗಳಲ್ಲಿ ವೈಷ್ನವ ಸತ್ರಗಳಿವೆ.ನುಮಿಲಿ ಘರ್ನ ಶಿವದೇವಾಲಯ ಅಹೋಂ ಅರಸರಿಂದ ನಿರ್ಮಿತವಾದದ್ದು.ಇಲ್ಲಿ ಸಾವಿರಾರು ಸಂಖ್ಯೆಯ ಕೋತಿಗಳಿವೆ.
ಇದು ಗೌಹಾತಿಯಿಂದ ೯೫ ಕಿಮಿ ದೂರವಿದೆ.ಇಲ್ಲಿ ಮುಬಾರಿ ದಾಸ ಹಬ್ಬವನ್ನು ಅಚರಿಸಲಾಗುತ್ತಿದ್ದು ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಬ್ಬ.ಇಲ್ಲಿ ಶ್ರೀ ಕೃಷ್ಣನ ರಾಸ ಲೀಲಾ ದೃಶ್ಯಗಳನ್ನು ಶ್ರದ್ದೆ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಹರಿ ದೇವಾಲಯದ ಅಂಗಳದಲ್ಲಿ ನವೆಂಬರ್ ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ. ವಾಸುದೇವ ದೇವಾಲಯ,ಕಾಲ ಭೈರವ ಲಿಂಗರಾಜ ಮಂದಿರ,ಬಾಗೇಶ್ವರಿ,ಗೌರಿ ದೇವಾಲಯ,ಹರಿ ಮಂದಿರ,ಬಿಲ್ಲೇಶ್ವರ ಮಂದಿರ,ಅಡಬಾರಿ ಕಾಳಿ ದೇವಾಲಯ ನೋಡತಕ್ಕ ಸ್ಥಳಗಳು. ಗೋ ಹೈ ಕಮಾಲ್ ಅಲಿ ರಸ್ತೆಯು ಕೋಚ್ ಅರಸ ಕಮಾಲ್ ನಿಂದ ನಿರ್ಮಿಸಲ್ಪಟ್ಟಿತು.ಕೂಚ್ ಬಿಹಾರ ಮತ್ತು ಉತ್ತರ ಲಖಿಂಪುರಗಳನ್ನು ಸಂಪರ್ಕಿಸುವ ಈ ರಸ್ತೆಯ ನಿರ್ಮಾಣ ಅದ್ಭುತವಾಗಿದೆ.
ಬಾರ್ಪೇಟ ಪಟ್ಟಣವು ರಾಜಧಾನಿಯಿಂದ ೧೪೦ ಕಿಮಿ ದೂರವಿದೆ. ಈ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ-೩೧ ಹಾದುಹೋಗುತ್ತದೆ.ಇಲ್ಲಿನ ಹೋಳಿಹಬ್ಬ ಅಥವಾ ದೌಲಿ ಜಾತ್ರೆ ಪ್ರಸಿದ್ದವಾಗಿದೆ.ಇದನ್ನು ವಸಂತ ಹಬ್ಬ ಎಂದೂ ಕರೆಯಬಹುದು.ವಸಂತನ ಆಗಮನವನ್ನು ಸ್ವಾಗತಿಸುವ ಸಲುವಾಗಿ ನೃತ್ಯಗಳು ಮತ್ತು ಹೋಳಿ ಹಾಡುಗಳನ್ನು ಹಾಡುತ್ತಾರೆ.ಇದೇ ಸಂದರ್ಭಗಳಲ್ಲಿ ಇಲ್ಲಿನ ಸತ್ರಗಳಾದ ಬಾರ್ಪೇಟ ಸತ್ರ,ಸೌಂದರಿಯ ಸತ್ರ ಮತ್ತು ಗಣಕ್ಕುಚಿ ಸತ್ರಗಳಲ್ಲಿ ದಶಾವತಾರದ ನೃತ್ಯಗಳನ್ನು ಅಭಿನಯಿಸಲಾಗುತ್ತದೆ.ಇಲ್ಲಿನ ಸತ್ರಗಳು ಮತ್ತು ಅವುಗಳ ಶಾಖೆಗಳಲ್ಲಿ ಜಾನಪದ ಲೋಕಸಂಗೀತ, ಲಾವಣಿ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಗೀತೆಗಳನ್ನು ಹಾಡಿ ಅಭಿನಯಿಸಲಾಗುತ್ತದೆ.ಇಲ್ಲಿ ಹಿತ್ತಾಳೆ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಷ್ಟೇನು ಮುಂದುವರೆಯದ ಇಲ್ಲಿ ವಿಶೇಷಗಳೇನೂ ಇಲ್ಲ.
ನಂದೇಶ್ವರ ದೇವಾಲಯ:ಇದು ೧೦-೧೧ ನೇ ಶತಮಾನದಲ್ಲಿ ನಿರ್ಮಿತವಾದ ಶಿವ ದೇವಾಲಯ. ಶಿವರಾತ್ರಿಯಂದು ನೂರಾರು ಭಕ್ತರು ಆಗಮಿಸಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ.
ಧುಬ್ರಿ ರಾಜಧಾನಿಯಿಂದ ೨೯೫ ಕಿಮಿ ದೂರವಿದೆ.ಧುಬ್ರಿಯನ್ನು ಅಸ್ಸಾಮಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.ವಿವಿಧ ಸಂಸ್ಕೃತಿ,ಭಾಷೆಗಳ ಜನತೆ ಇಲ್ಲಿ ನೆಲಸಿರುವುದರಿಂದ ಈ ಸ್ಥಳ ವಿಶಿಷ್ಟಗಳ ಸಂಗಮವಾಗಿದೆ.ಇಲ್ಲಿನ ಪ್ರಮುಖ ಭಾಷೆ ಗೋಲ್ಪೋರಿಯ.
????
This article uses material from the Wikipedia ಕನ್ನಡ article ಅಸ್ಸಾಂ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.