ಕ್ರೈಸ್ತ ಧರ್ಮ

ಕ್ರೈಸ್ತ ಧರ್ಮ ಯೇಸು ಕ್ರಿಸ್ತನ ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತ ಏಕದೇವವಾದವನ್ನು ಅನುಸರಿಸುವ ಧರ್ಮಗಳಲ್ಲಿ ಒಂದು.

೨೦೦೧ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ೨.೧ ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ, ಜಗತ್ತಿನ ಅತಿ ದೊಡ್ಡ ಧರ್ಮವಾಗಿದೆ.

ಇಂದಿಗೆ ಸುಮಾರು ೨೦೦೦ ವರ್ಷಗಳ ಹಿಂದೆ ಪ್ಯಾಲೆಸ್ತೀನ್ ದೇಶದ ಬೆತ್ಲೆಹೇಂ ಎಂಬ ಊರಿನಲ್ಲಿ ಯೇಸುಕ್ರಿಸ್ತ ಹುಟ್ಟಿದ. ಅವನು ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿದ್ದುದರಿಂದ ಸಹಜವಾಗಿ ಯೆಹೂದ್ಯರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಯುವಕ ಯೇಸುಕ್ರಿಸ್ತನ ವಿಚಾರಪ್ರದ ಮಾತುಗಳಿಂದ ಪ್ರಭಾವಿತರಾದ ಅವರು ಅವನನ್ನೇ ತಮ್ಮ ನಾಯಕನನ್ನಾಗಿ ಆರಿಸಿಕೊಂಡರು. ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ. ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.

ಕ್ರೈಸ್ತ ಧರ್ಮದ ಉದಯ

  • ಕ್ರಿ.ಶ. ೧ನೇ ಶತಮಾನದಲ್ಲಿ ಯಹೂದಿ ಧರ್ಮದ ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ತನಖ್ ಅನ್ನು ತನ್ನ ಧರ್ಮಗ್ರಂಥವಾದ ಬೈಬಲ್‌ನ ಒಂದು ಭಾಗವಾದ ಹಳೆ ಒಡಂಬಡಿಕೆ (Old Testament)ಆಗಿ ಅಳವಡಿಸಿಕೊಂಡಿದೆ.
  • ಇಸ್ಲಾಂ, ಯಹೂದಿ ಧರ್ಮ ಮತ್ತು ಕ್ರೈಸ್ತ ಧರ್ಮಗಳೆಲ್ಲಾ ಅಬ್ರಹಾಮ್‌ನನ್ನು ಪ್ರಮುಖನನ್ನಾಗಿ ಪರಿಗಣಿಸುವುದರರಿಂದ ಇವನ್ನು ಅಬ್ರಹಮೀಯ ಧರ್ಮಗಳೆಂದೂ ವರ್ಗೀಕರಿಸಲಾಗುತ್ತವೆ. ಯೇಸುಕ್ರಿಸ್ತ ಹುಟ್ಟುವ ಕಾಲ, ಹುಟ್ಟಿದ ನಂತರದ ಕಾಲಘಟ್ಟ ಹಾಗೂ ಆತನ ಸಾವು-ಪುನರುತ್ಥಾನದ ನಂತರದ ಕೆಲವು ದಿನಗಳ ಚರಿತ್ರೆಯು ಬೈಬಲ್‌ನಲ್ಲಿ ಹೊಸ ಒಡಂಬಡಿಕೆ (New Testament)ಯ ರೂಪದಲ್ಲಿದೆ.

ಇತಿವೃತ್ತ

  • ಇಂದಿಗೆ ಸುಮಾರು ೨೦೦೦ ವರ್ಷಗಳ ಹಿಂದೆ ಪ್ಯಾಲೆಸ್ತೀನ್ ದೇಶದ ಬೆತ್ಲೆಹೇಂ ಎಂಬ ಊರಿನಲ್ಲಿ ಯೇಸುಕ್ರಿಸ್ತ ಹುಟ್ಟಿದ. ಅವನು ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿದ್ದುದರಿಂದ ಸಹಜವಾಗಿ ಯೆಹೂದ್ಯರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಯುವಕ ಯೇಸುಕ್ರಿಸ್ತನ ವಿಚಾರಪ್ರದ ಮಾತುಗಳಿಂದ ಪ್ರಭಾವಿತರಾದ ಅವರು ಅವನನ್ನೇ ತಮ್ಮ ನಾಯಕನನ್ನಾಗಿ ಆರಿಸಿಕೊಂಡರು.
  • ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ.
  • ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು.
  • ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.

Tags:

ಧರ್ಮಬಿಲಿಯನ್ಯೇಸು ಕ್ರಿಸ್ತ

🔥 Trending searches on Wiki ಕನ್ನಡ:

ಶಾಲೆಮೇಯರ್ ಮುತ್ತಣ್ಣಪಂಪ ಪ್ರಶಸ್ತಿಶಬರಿಬೆಂಗಳೂರು ಗ್ರಾಮಾಂತರ ಜಿಲ್ಲೆಬಾಲ ಗಂಗಾಧರ ತಿಲಕಜೇನು ಹುಳುಸಾರಜನಕವಿಕ್ರಮಾರ್ಜುನ ವಿಜಯಭಾರತೀಯ ಆಡಳಿತಾತ್ಮಕ ಸೇವೆಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಅಸ್ಪೃಶ್ಯತೆಭಾರತದ ಚುನಾವಣಾ ಆಯೋಗಪರೀಕ್ಷೆಚಿಪ್ಕೊ ಚಳುವಳಿಸಾಹಿತ್ಯಕನ್ನಡಹಡಪದ ಅಪ್ಪಣ್ಣಪಿತ್ತಕೋಶಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಏಲಕ್ಕಿಮೌಲ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಜಾಗತಿಕ ತಾಪಮಾನ ಏರಿಕೆಬಾಲಕೃಷ್ಣದಿನೇಶ್ ಕಾರ್ತಿಕ್ಭಾರತದ ವಾಯುಗುಣಮಾಧ್ಯಮಭಾರತೀಯ ಅಂಚೆ ಸೇವೆಭಾರತದ ಸ್ವಾತಂತ್ರ್ಯ ಚಳುವಳಿತೀರ್ಥಕ್ಷೇತ್ರಶೂದ್ರಬಿ.ಎಸ್. ಯಡಿಯೂರಪ್ಪಹರಿಹರ (ಕವಿ)ಕನ್ನಡಪ್ರಭಏಕರೂಪ ನಾಗರಿಕ ನೀತಿಸಂಹಿತೆಪುರೂರವಸ್ಹನುಮಂತವಿಜಯಪುರಮೂಲಧಾತುಗಳ ಪಟ್ಟಿರಜಪೂತಗುರು (ಗ್ರಹ)ಸೆಸ್ (ಮೇಲ್ತೆರಿಗೆ)ಶ್ರೀ ರಾಮಾಯಣ ದರ್ಶನಂಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಿತ್ತೂರು ಚೆನ್ನಮ್ಮಉದಾರವಾದಬೇಲೂರುಐಹೊಳೆಕೆಂಪು ಕೋಟೆಚಂದ್ರಗುಪ್ತ ಮೌರ್ಯಚಂದನಾ ಅನಂತಕೃಷ್ಣಹಣಕಾಸು ಸಚಿವಾಲಯ (ಭಾರತ)ನುಡಿಗಟ್ಟುಗೋಪಾಲಕೃಷ್ಣ ಅಡಿಗಅಡಿಕೆಕೈವಾರ ತಾತಯ್ಯ ಯೋಗಿನಾರೇಯಣರುಕೆ. ಅಣ್ಣಾಮಲೈಅಮೇರಿಕ ಸಂಯುಕ್ತ ಸಂಸ್ಥಾನಕೆ. ಎಸ್. ನಿಸಾರ್ ಅಹಮದ್ಕನ್ನಡ ಸಂಧಿಒಡೆಯರ್ಭಾರತದ ರಾಷ್ಟ್ರಪತಿಗಳ ಪಟ್ಟಿಮಧ್ವಾಚಾರ್ಯಕರಗಸಾರಾ ಅಬೂಬಕ್ಕರ್ಬಾರ್ಲಿಭಾರತೀಯ ಸಂಸ್ಕೃತಿಭಾರತೀಯ ಸ್ಟೇಟ್ ಬ್ಯಾಂಕ್ರತ್ನಾಕರ ವರ್ಣಿಕುಂದಾಪುರಮಾಹಿತಿ ತಂತ್ರಜ್ಞಾನಭಾಮಿನೀ ಷಟ್ಪದಿಪ್ರಚಂಡ ಕುಳ್ಳವೇದ🡆 More