ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು.

ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ. ತನ್ನ ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ.

ಚಿತ್ರ:Shree Nija Sharana Ambigara chouwdayya jayanti procession mp suresh angadi.jpg
Ambigara Chouwdayya Jayanti procession Mp Suresh Angadi
ಅಂಬಿಗರ ಚೌಡಯ್ಯ
ಜನನಚೌಡೇಶ (ಮೂಲ ಹೆಸರು)

ತಾಯಿ:ಪಂಪಾದೇವಿ

ತಂದೆ: ವಿರೂಪಾಕ್ಷ

1120 (೧೨ನೆ ಶತಮಾನ)
ಚೌಡದಾನಪುರ, ರಾಣಿಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ಕರ್ನಾಟಕ
ಮರಣರಾಣಿಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ
ಅಂಕಿತನಾಮಅಂಬಿಗರ ಚೌಡಯ್ಯ
ವೃತ್ತಿಅಂಬಿಗ
ಇದಕ್ಕೆ ಪ್ರಸಿದ್ಧವಚನ ಸಾಹಿತ್ಯ


ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸಿದ್ದಾನೆ.

ವಚನಗಳ ಶೈಲಿ, ದೃಷ್ಟಿ

ಉಳಿದ ವಚನಕಾರರ ವಚನಗಳಲ್ಲಿರುವಂತೆ ಇವರಲ್ಲಿಯೂ ಶಿವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬೇಕು.

ಅವನ ವಚನಗಳ ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವನೊಬ್ಬ ಕೆಚ್ಚೆದೆಯ, ನಿಷ್ಠುರ ಪ್ರಕೃತಿಯ, ಗ್ರಾಮ್ಯ ಮನೋಧರ್ಮದ ಒರಟು ವಚನಕಾರ ಎಂಬುದು ಸ್ಪಷ್ಟವಾಗುತ್ತದೆ. ಅವನು ನ್ಯಾಯನಿಷ್ಠುರ, ದಯಾದಾಕ್ಷಿಣ್ಯಪರನಲ್ಲ. ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅವನು ಟೀಕಿಸದೆ ಬಿಡುವುದಿಲ್ಲ. ಅವನು ಮೃದುವಾಗಿ ಮಾತನಾಡುವುದು ಅಪೂರ್ವ; ಮಾತಿನ ಬಹುಭಾಗ ಹರಿತವಾದದ್ದು, ಸಂಸ್ಕಾರದೂರವಾದದ್ದು. ‘ಕೇಳಿರಯ್ಯ ಮಾನವರೇ’, ‘ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೋ’, ‘ನನಗೊಬ್ಬರೆಂಜಲು ಸೇರದೆಂದು ಶುಚಿತನದಲ್ಲಿ ಬದುಕುವ ಬರಿಯ ಮಾತಿನ ಭುಂಜಕರು ನೀವು ಕೇಳಿರೋ’, ‘ಪರಪುರುಷಾರ್ಥವನರಿಯದೆ ಕೆಟ್ಟನರ ಕುರಿಗಳು ನೀವು ಕೇಳಿರೋ’ ಎಂದು ಆರಂಭವಾಗಿ ‘ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದ’, ‘ಪಡಿಹಾರ ಉತ್ತಣ್ಣನ ಎಡಪಾದರಕ್ಷೆಯಿಂದ ಪಟಪಟನೆ ಹೊಡೆಯೆಂದ’, ‘ಮೂಗ ಕೊಯ್ದು ಇಟ್ಟಂಗಿಯ ಕಲ್ಲಿಲೆ ಸಾಸಿವೆಯ ತಿಕ್ಕಿ ಹಿಟ್ಟಿನ ತಳಿದು ಮೇಲೆ ನಿಂಬೆಯ ಹುಳಿಯನೆ ಹಿಂಡಿ ಪಡುವಲ ಗಾಳಿಗೆ ಹಿಡಿ’-ಹೀಗೆ ಮುಕ್ತಾಯವಾಗುತ್ತದೆ, ಇವನ ವಚನಗಳ ಶೈಲಿ.

ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ನಮಗೆ ಇಷ್ಟರಮಟ್ಟಿಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು. ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲೇ ಎಂದು ತೋರುತ್ತದೆ. ಒಬ್ಬ ಸಿಡಿಲು ನುಡಿಯ ಸರ್ವಜ್ಞ; ಇನ್ನೊಬ್ಬ ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯ.

ಉಲ್ಲೇಖಗಳು

ಅಂಬಿಗರ ಚೌಡಯ್ಯ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಬಸವೇಶ್ವರವಚನ ಸಾಹಿತ್ಯಶತಮಾನ

🔥 Trending searches on Wiki ಕನ್ನಡ:

ಸೆಸ್ (ಮೇಲ್ತೆರಿಗೆ)ಹೆಚ್.ಡಿ.ಕುಮಾರಸ್ವಾಮಿಮದಕರಿ ನಾಯಕಜೋಳಆದಿಪುರಾಣಯೋಗಐಹೊಳೆಮೂಲಭೂತ ಕರ್ತವ್ಯಗಳುದಾಳಿಂಬೆಕಾಮಸೂತ್ರಸಂಧಿಬಾದಾಮಿಕೆ. ಎಸ್. ನಿಸಾರ್ ಅಹಮದ್ಭಾರತದ ಸಂಸ್ಕ್ರತಿಡಿ.ಎಸ್.ಕರ್ಕಿಮಳೆನೀರು ಕೊಯ್ಲುಕ್ರಿಯಾಪದಹಾಕಿಹನುಮಾನ್ ಚಾಲೀಸಧರಮ್ ಸಿಂಗ್ಸುಮಲತಾವೇದಸಂವಹನಚಂದ್ರಗುಪ್ತ ಮೌರ್ಯಹಸ್ತ ಮೈಥುನಇಸ್ರೇಲ್ಕರ್ನಾಟಕದ ವಾಸ್ತುಶಿಲ್ಪಗಜ್ಜರಿಜನ್ನಭೀಮಸೇನಭಾರತದಲ್ಲಿನ ಜಾತಿ ಪದ್ದತಿಅಂಡವಾಯುವಿಭಕ್ತಿ ಪ್ರತ್ಯಯಗಳುರೇಷ್ಮೆತುಮಕೂರುಚಂಡಮಾರುತಆಪ್ತರಕ್ಷಕ (ಚಲನಚಿತ್ರ)ಛಂದಸ್ಸುಸೀತೆದುರ್ಯೋಧನಮಾಧ್ಯಮಇಮ್ಮಡಿ ಪುಲಿಕೇಶಿತಂತ್ರಜ್ಞಾನಕನ್ನಡ ವ್ಯಾಕರಣಪರಿಸರ ರಕ್ಷಣೆಸಂಗೊಳ್ಳಿ ರಾಯಣ್ಣಮೈಗ್ರೇನ್‌ (ಅರೆತಲೆ ನೋವು)ಕರ್ನಾಟಕದ ಮುಖ್ಯಮಂತ್ರಿಗಳುಚಿತ್ರದುರ್ಗದ ನಾಯಕರುಜನಪದ ನೃತ್ಯಗಳುಶಬ್ದ ಮಾಲಿನ್ಯಆಸ್ಟ್ರೇಲಿಯಭಾರತದ ಸ್ವಾತಂತ್ರ್ಯ ದಿನಾಚರಣೆಮ್ಯಾಥ್ಯೂ ಕ್ರಾಸ್ಹರಿಹರ (ಕವಿ)ಭಾರತೀಯ ಭೂಸೇನೆಪಂಜುಭಾರತೀಯ ಸ್ಟೇಟ್ ಬ್ಯಾಂಕ್ಕೇಂದ್ರಾಡಳಿತ ಪ್ರದೇಶಗಳುಆಟಒಡೆಯರ್ರಾಜ್‌ಕುಮಾರ್ಕರ್ನಾಟಕ ವಿಧಾನ ಸಭೆಪಟ್ಟದಕಲ್ಲುಮೆಂತೆಅಸ್ಪೃಶ್ಯತೆಮಾದರ ಚೆನ್ನಯ್ಯಭಾರತೀಯ ಶಾಸ್ತ್ರೀಯ ಸಂಗೀತಕರ್ನಾಟಕದ ಬಂದರುಗಳುಅಕ್ಷಾಂಶ ಮತ್ತು ರೇಖಾಂಶದಿಕ್ಸೂಚಿನವೋದಯನಿರಂಜನದೇವತಾರ್ಚನ ವಿಧಿಆರೋಗ್ಯಅಂತರ್ಜಲಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫🡆 More