ರಿಕ್ಟರ್ ಮಾಪಕ

ರಿಕ್ಟರ್, ಮಾನಕ ಅಧಿಕೇಂದ್ರಗಳಲ್ಲಿ ಭೂಕಂಪನಗಳ ಪರಿಮಾಣ ವನ್ನು ಅಂದಾಜು ಮಾಡಲು ಮತ್ತು ತುಲನೆ ಮಾಡಲು ಉಪಯೋಗಿಸುವ ಅಳತೆಗೋಲು (ರಿಕ್ಟರ್ ಸ್ಕೇಲ್).

ರಿಕ್ಟರ್ ಮಾಪಕ
ಚಾರ್ಲ್ಸ್ ರಿಕ್ಟರ್
ರಿಕ್ಟರ್ ಮಾಪಕ
ರಿಕ್ಟರ್ ಮಾಪಕ

ಈ ಅಳತೆಗೋಲನ್ನು ಮೊಟ್ಟಮೊದಲಿಗೆ ೧೯೩೫ರಲ್ಲಿ ಚಾರ್ಲ್ಸ್ ರಿಕ್ಟರ್ ಎಂಬ ವ್ಯಕ್ತಿಯು ಬೆನೋ ಗುಟನ್‌ಬರ್ಗ್ ಎಂಬ ವ್ಯಕ್ತಿಯೊಡಗೂಡಿ ಕ್ಯಾಲಿಫೋರ್ನಿಯಾದ ಕೆಲವು ಭಾಗಗಳಲ್ಲಿ ಅಳವಡಿಸಿದ್ದ ವುಡ್-ಆಂಡರ್ಸನ್ ಭೂಕಂಪ ಮಾಪಕದಲ್ಲಿ ದಾಖಲಾದ ಕಂಪನಗಳನ್ನು ಅಳೆಯಲು ಉಪಯೋಗಿಸಿದನು.


ಈ ಅಳತೆಗೋಲು ಭೂಮಿಗೆ ಸಮಾನಾಂತರವಾಗಿ ಆಗುವ ಕಂಪನದ ತೀವ್ರತೆಯನ್ನು ಅವಲಂಬಿಸಿ ೧೦ರ ಲಘುಗಣಕವನ್ನು ಆಧರಿಸಿರುದ ಒಂದು ಸಂಖ್ಯೆಯನ್ನು ನೀಡುತ್ತದೆ. ಇದೊಂದು ವಿವೃತಾಂತ (ಓಪನ್ ಎಂಡೆಡ್) ಲಘುಗಣಕೀಯ (ಲಾಗರಿತ್ಮಿಕ್) ಮಾನಕವಾಗಿದ್ದರೂ 0ಯಿಂದ 10ರವರೆಗೆ ಸಂಖ್ಯೆಗಳುಳ್ಳ ಮಾನಕವೆಂದು ನಿರೂಪಿಸುವುದು ರೂಢಿ. ಈ ವ್ಯಾಪ್ತಿಯನ್ನು ಮೀರುವ ಭೂಕಂಪನದ ಸಂಭವನೀಯತೆ ಕಡಿಮೆ ಎಂಬುದೇ ಕಾರಣ.

ಅಳತೆಗೋಲಿನ ಬಗ್ಗೆ ಹೆಚ್ಚಿನ ಮಾಹಿತಿ

ಭೂಚಲನೆಯ ಪಾರವನ್ನು (ಆಂಪ್ಲಿಟ್ಯೂಡ್) ಪ್ರಧಾನ ಅಲೆಯ ಅವಧಿಯಿಂದ ಭಾಗಿಸಿದಾಗ ಲಭಿಸುವ ಭಾಗಲಬ್ಧದ ಲಘುಗಣಕವನ್ನು ಈ ಮಾನಕದಲ್ಲಿ ನಮೂದಿಸಿರುವ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಎಂದೇ, ರಿಕ್ಟರ್ ಮಾನಕದಲ್ಲಿ ಯಾವುದೇ ಸಂಖ್ಯೆ ಪ್ರತಿನಿಧಿಸುವ ಭೂಕಂಪನ ಅದರ ಹಿಂದಿನ ಸಂಖ್ಯೆಯದಕ್ಕಿಂತ 10ಪಟ್ಟು ಅಧಿಕ ಪರಿಮಾಣವುಳ್ಳದ್ದಾಗಿದೆ. ಭೂಕಂಪನ ಬಿಡುಗಡೆ ಮಾಡಿದ ಒಟ್ಟು ಶಕ್ತಿಯನ್ನು ಅಂದಾಜು ಮಾಡಲು ಮಾತ್ರ ಇದು ಉಪಯುಕ್ತ (ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಭೂಕಂಪನ ವಿನಾಶಕಾರೀ ಸಾಮಥ್ರ್ಯ ವನ್ನು ಅಂದಾಜು ಮಾಡಲು ಮರ್ಕಲಿ ಮಾನಕ ಬಳಕೆಯಲ್ಲಿದೆ). ಅಮೆರಿಕನ್ ಭೂಕಂಪನವಿಜ್ಞಾನಿ ಚಾಲ್ರ್ಸ್ ಫ್ರಾನ್ಸಿಸ್ ರಿಕ್ಟರ್(1900-85) ಈ ಮಾನಕವನ್ನು ಉಪಜ್ಞಿಸಿದ (1935).


ರಿಕ್ಟರ್ ಮಾನಕದ ಸಂಖ್ಯೆಗಳು ಪ್ರತಿನಿಧಿಸುವ ಭೂಕಂಪಗಳ ಸಂಕ್ಷಿಪ್ತ ವಿವರಣೆ

  • 3.5 ಅಥವಾ ಅದಕ್ಕಿಂತ ಕಡಿಮೆ: ಭೂಕಂಪನ ಮಾಪಕಗಳು ಮಾತ್ರ ಗುರುತಿಸುತ್ತವೆ, ಮಾನವಗ್ರಾಹ್ಯ ಪರಿಣಾಮ ಗಳು ಇಲ್ಲ;
  • 3.5-6: ಸಾಪೇಕ್ಷ ಅತ್ಯಂತ ಲಘು ಕಂಪನ, ಅಸ್ಥಿರ ವಸ್ತುಗಳ ಬೀಳುವಿಕೆ ಮುಂತಾದ ಮಾನವಗ್ರಾಹ್ಯ ಪರಿಣಾಮಗಳು;
  • 6-7: ಗೋಡೆಗಳಲ್ಲಿ ಬಿರುಕು ಅಥವಾ ದುರ್ಬಲ ಗೋಡೆ, ಕಟ್ಟಡಗಳ ಕುಸಿತ, ಭೂಬಿರಿತ ಮುಂತಾದ ಗಂಭೀರ ಪರಿಣಾಮಗಳು;
  • 7-8: ಬಹುತೇಕ ಕಟ್ಟಡಗಳ ಹಾಗೂ ಸೇತುವೆಗಳ ನಾಶ, ರೈಲ್ವೆ ಹಳಿಗಳ ಬಾಗುವಿಕೆ, ಪ್ರವಾಹಗಳು, ಭೂಕುಸಿತಗಳು ಮುಂತಾದ ಆಪತ್ತುಗಳು.
  • 8ಕ್ಕಿಂತ ಅಧಿಕ: ಸರ್ವನಾಶ.

ಬಾಹ್ಯ ಸಂಪರ್ಕಗಳು

ರಿಕ್ಟರ್ ಮಾಪಕ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಭೂಕಂಪ

🔥 Trending searches on Wiki ಕನ್ನಡ:

ಭಾರತದ ಉಪ ರಾಷ್ಟ್ರಪತಿಮೈಸೂರುಭಗವದ್ಗೀತೆಮಹಾತ್ಮ ಗಾಂಧಿಬಿ. ಆರ್. ಅಂಬೇಡ್ಕರ್ಪ್ಯಾರಾಸಿಟಮಾಲ್ಕನ್ನಡ ರಂಗಭೂಮಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಅಂತರಜಾಲಕೃಷಿ ಉಪಕರಣಗಳುಬಿ. ಎಂ. ಶ್ರೀಕಂಠಯ್ಯರಾಯಚೂರು ಜಿಲ್ಲೆಸಮಾಜ ವಿಜ್ಞಾನಶ್ರೀ ಸಿದ್ಧಲಿಂಗೇಶ್ವರಉಡುಪಿ ಜಿಲ್ಲೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಹಾವುಎಂ. ಕೆ. ಇಂದಿರಛಂದಸ್ಸುಜಿಪುಣಶಿವರಾಜ್‍ಕುಮಾರ್ (ನಟ)ಸಮುದ್ರಗುಪ್ತಬಾಗಿಲುಕುವೆಂಪುರಾಣಿ ಅಬ್ಬಕ್ಕಅಜವಾನತಾಳೀಕೋಟೆಯ ಯುದ್ಧದಶರಥತುಂಗಭದ್ರ ನದಿಭಾರತೀಯ ಸ್ಟೇಟ್ ಬ್ಯಾಂಕ್ಕದಂಬ ಮನೆತನಮಧ್ವಾಚಾರ್ಯಬ್ರಹ್ಮಚರ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕಜ್ಞಾನಪೀಠ ಪ್ರಶಸ್ತಿಕೈಕೇಯಿಬಾದಾಮಿಅಳಿಲುಸ್ತ್ರೀದ್ವಾರಕೀಶ್ವ್ಯಕ್ತಿತ್ವಓಂ ನಮಃ ಶಿವಾಯಸೀತಾ ರಾಮಶಿವವಸ್ತುಸಂಗ್ರಹಾಲಯಸಮಾಜಶಾಸ್ತ್ರನಯನತಾರದೀಪಾವಳಿಹಣಕುಬೇರಬಾಬರ್ಕರ್ನಾಟಕದ ಮಹಾನಗರಪಾಲಿಕೆಗಳುಮಹಾವೀರಭಾರತೀಯ ಜನತಾ ಪಕ್ಷಶಂಕರ್ ನಾಗ್ಕ್ರಿಕೆಟ್ಅಂತಾರಾಷ್ಟ್ರೀಯ ಸಂಬಂಧಗಳುಪೂಜಾ ಕುಣಿತಪಂಪಔಡಲಕಂಸಾಳೆಜೇನು ಹುಳುಮಡಿವಾಳ ಮಾಚಿದೇವವಾರ್ಧಕ ಷಟ್ಪದಿಕನ್ನಡ ರಾಜ್ಯೋತ್ಸವಚಾವಣಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುವಿಜಯನಗರ ಸಾಮ್ರಾಜ್ಯವಿದುರಾಶ್ವತ್ಥಸವರ್ಣದೀರ್ಘ ಸಂಧಿದ.ರಾ.ಬೇಂದ್ರೆಕನಕದಾಸರುಸಂಯುಕ್ತ ರಾಷ್ಟ್ರ ಸಂಸ್ಥೆದ್ಯುತಿಸಂಶ್ಲೇಷಣೆ🡆 More